2025-2026ನೇ ಸಾಲಿನ ಎಸ್ ಎಸ್ ಎಲ್ ಸಿ ಮಕ್ಕಳ ಬೀಳ್ಕೊಡುಗೆ ಕಾರ್ಯಕ್ರಮಲಿಂಗಸುಗೂರು ತಾಲ್ಲೂಕಿನ ಹಟ್ಟಿ ಚಿನ್ನದ ಗಣಿ ಸಮೀಪದ ಯಲಗಟ್ಟಾ ಗ್ರಾಮದ ಸರಕಾರಿ ಫ್ರೌಢ ಶಾಲೆಯಲ್ಲಿ2025-26 ನೇ ಸಾಲಿನ ಎಸ್ ಎಸ್ ಎಲ್ ಸಿ ಮಕ್ಕಳ ಬೀಳ್ಕೊಡುವ ಕಾರ್ಯಕ್ರಮದಲ್ಲಿ ವಿದ್ಯೆ ಕೊಡುವ ತಾಯಿ ಸರಸತಿ ಭಾವಚಿತ್ರಕ್ಕೆ ಪೂಜ ಕಾರ್ಯಕ್ರಮ ಮಾಡುವ ಮೂಲಕ ಅದ್ದೂರಿಯಾಗಿ ಕಾರ್ಯಕ್ರಮ ಜರಗಿದ್ದುಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅಂಬರೀಶ್ ನಿಲಗೋಲ್ ಮುಖ್ಯಪಾಗಿದ್ದರು ವಹಿಸಿಕೊಂಡಿದ್ದರು ಕಾರ್ಯಕ್ರಮದ ಉದ್ಘಾಟಕರಾಗಿ ಶಾಲೆಯ ಅಧ್ಯಕ್ಷರಾದ ನಿಂಗಣ್ಣ ಸೌಕಾರ್ ಉದ್ಘಾಟನೆ ನಿರ್ವಹಿಸಿದರುಈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು ಅಣ್ಣಯ್ಯ ಜಯ ಕರ್ನಾಟಕ ಸಂಘಟನೆಯ ಗ್ರಾಮ ಘಟಕ ಅಧ್ಯಕ್ಷರು ಮಕ್ಕಳು ಉತ್ತಮ ಫಲಿತಾಂಶ ತೆಗೆದುಕೊಡುವುದರ ಮೂಲಕ ಶಾಲೆಗೆ ಕೀರ್ತಿಯನ್ನು ತರುವುದರ ಜೊತೆಗೆ ತಂದೆ-ತಾಯಿರ ಕೀರ್ತಿಯನ್ನು ಹಾಗೂ ಊರಿನ ಕೀರ್ತಿಯನ್ನು ಎತ್ತಿಡಬೇಕೆಂದು ಮಕ್ಕಳಿಗೆ ಕಿವಿಮಾತು ಹೇಳಿದರುಅದೇ ರೀತಿ ಕರವೇ ಗ್ರಾಮ ಘಟಕದ ಅಧ್ಯಕ್ಷರಾದ ರಾಜು ನಾಯಕ ಅವರು ಕೂಡ ಮಾತನಾಡುತ್ತಾ 10ನೇ ತರಗತಿ ಎಲ್ಲ ಮಕ್ಕಳಿಗೆ ಉತ್ತಮ ಫಲಿತಾಂಶ ತಂದು ಕೊಡಬೇಕಾಗಿ ಅವರು ಶುಭ ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಶಿವಶಂಕರ ಕರುನಾಡ ವಿಜಯ ಸೇನೆ ಗ್ರಾಮಘಟಕ ಅಧ್ಯಕ್ಷರು ಯಲಗಟ್ಟಾ , ಬಸವರಾಜ,ನಾಗಣ್ಣ, ವೆಂಕಟೇಶ ಶಿಕ್ಷಕರು ಹನುಮಂತಪ್ಪ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ಸಮತೋಲನ ಬಜೆಟ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರು ಮಂಡಿಸಿರುವ 2026-27ನೇ ಬಜೆಟ್, ವಿವಿಧ ಇಲಾಖೆಗಳಲ್ಲಿನ 56 ಸಾವಿರ ಹುದ್ದೆಗಳ ನೇಮಕಾತಿ ಸೇರಿದಂತೆ ಎಲ್ಲ ಕ್ಷೇತ್ರಗಳನ್ನು ಒಳಗೊಂಡ ಸಮಗ್ರ ಮತ್ತು ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ಸಮತೋಲನ ಬಜೆಟ್ ಆಗಿದೆ.ವಿಶೇಷವಾಗಿ ವಿವಿಧ ಹುದ್ದೆಗಳ ನೇಮಕಾತಿ ಬಗ್ಗೆ ಯುವಕರಿಗೆ ಆತಂಕವಿತ್ತು. 56 ಸಾವಿರ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಘೋಷಿಸಿದ್ದಾರೆ. ರೈತ ಸಮುದಾಯಕ್ಕೆ 30 ಸಾವಿರ ಕೋಟಿ ರೂ. ಸಾಲ ನೀಡುವ ತೀರ್ಮಾನವನ್ನು ಬಜೆಟ್ನಲ್ಲಿ ಕೈಗೊಂಡಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ 15000 ಹುದ್ದೆ, ಪೊಲೀಸ್ ಇಲಾಖೆಯಲ್ಲಿ 8 ಸಾವಿರ ಹುದ್ದೆಗಳು ಹಾಗೂ ಆರೋಗ್ಯ ಇಲಾಖೆಯಲ್ಲಿ 2500 ಹುದ್ದೆಗಳ ನೇಮಕಾತಿ ಬಗ್ಗೆ ಬಜೆಟ್ನಲ್ಲಿ ಘೋಷಣೆ ಮಾಡಿದ್ದಾರೆ. ಪಂಚ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಲಾಗುವುದು ಎಂಬುದನ್ನು ಬಜೆಟ್ನಲ್ಲಿ ತಿಳಿಸಿದ್ದಾರೆ.ಹೆಚ್ಚುತ್ತಿರುವ ಮೊಬೈಲ್ ಬಳಕೆಯಿಂದ ಮಕ್ಕಳ ಮೇಲೆ ಬೀರುವ ಅಡ್ಡ ಪರಿಣಾಮಗಳನ್ನು ತಡೆಗಟ್ಟುವ ಉದ್ದೇಶದಿಂದ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣದ ಬಳಕೆ ನಿಷೇಧ ಮಾಡುವ ತೀರ್ಮಾನ ಒಳ್ಳೆಯ ಬೆಳವಣಿಗೆ. ತಂತ್ರಜ್ಞಾನ ಬಳಸಿ ರಾಜ್ಯಕ್ಕೆ ಸೀಮಿತವಾಗಿ 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣ ಬಳಸದಂತೆ ನಿಷೇಧಿಸಬಹುದಾಗಿದೆ.ರಾಜ್ಯದ ಆರ್ಥಿಕ ಶಿಸ್ತನ್ನು ಕಾಪಾಡಿರುವ 17 ಬಾರಿ ಬಜೆಟ್ ಮಂಡಿಸಿರುವ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರಿಗೆ ಮತ್ತೊಮ್ಮೆ ಅಭಿನಂದನೆಗಳು.
15ನೇ ವರ್ಷದ ಶ್ರೀ ಆದಿಶಕ್ತಿ ರೇಣುಕ ಯಲ್ಲಮ್ಮನವರ ವಾರ್ಷಿಕೋತ್ಸವ ಮತ್ತು ಜಾತ್ರಾ ಮಹೋತ್ಸವ ಆತ್ಮೀಯರೇ ಎಲ್ಲರಿಗೂ ಸ್ವಾಗತ ನಗರದ ಶೆಟ್ಟಿಹಳ್ಳಿ ಜ್ಯೋತಿ ನಗರ ಶ್ರೀ ಆಧಿಶಕ್ತಿ ರೇಣುಕ ಯಲ್ಲಮ್ಮ ದೇವಿಯ ಜಾತ್ರ ಮಹೋತ್ಸವವನ್ನು ವಿಶೇಷ ಪೂಜೆ ಮತ್ತು ಅಲಂಕಾರ, ಅನ್ನಸಂತರ್ಪಣಾ ಕಾರ್ಯಕ್ರಮವನ್ನು ಸತತ 16 ವರ್ಷಗಳಿಂದ ಶೆಟ್ಟಿಹಳ್ಳಿ ಗ್ರಾಮಸ್ತರು ಮಾಡುತ್ತ ಬರುತ್ತಿದ್ದು ಅದರಂತೆ ಈ ವರ್ಷವೂ ವಿಶೇಷ ಪೂಜಾ ಕಾರ್ಯಕ್ರಮಗಳೊಂದಿಗೆ ಹಮ್ಮಿಕೊಳ್ಳಲಾಗಿದೆ,2010ರಿಂದ ಪ್ರಾರಂಭವಾಗಿರುವ ಈ ಜಾತ್ರಾ ಮಹೋತ್ಸವವನ್ನು ತುಮಕೂರು ನಗರ ಮತ್ತು ತಾಲ್ಲೂಕಿನಲ್ಲಿರುವ ಮಂಗಳಮುಖಿಯರು ಸಮುದಾಯದ ಮುಖಂಡರಾದ ಶ್ರೀಮತಿ ದೀಪಿಕಮ್ಮ ರವರ ನೇತೃತ್ವದಲ್ಲಿ ಸಾವಿರಾರು ತೃತೀಯ ಲಿಂಗಿಗಳು ಭರತ ಉಣ್ಣಿಮೆಯೆಂದು ಶ್ರೀ ರೇಣುಕ ಯಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವವನ್ನು ನಡೆಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ. ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಿಯ ಅದ್ದೂರಿ ಜಾತ್ರ ಮಹೋತ್ಸ ಸಮಾರಂಭವನ್ನು ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನಶಕ ವರ್ಷಂಗಳು 1947ನೇ ಶ್ರೀ ವಿಶ್ವಾವಸುನಾಮ ಸಂವತ್ಸರದ ಪಾಲ್ಗುಣ ಬಹುಳ ತದಿಗೆ ದಿನಾಂಕ: 06-3-2026ನೇ ಶುಕ್ರವಾರದಂದು ಬೆಳಗ್ಗೆ 5.30 ರಿಂದ 6.30ರೊಳಗೆ ಬ್ರಾಹ್ಮೀ ಮುಹೂರ್ತದಲ್ಲಿ ಸುಮಂಗಲಿಯರಿಂದ ಗಂಗಾ ಪೂಜೆ, ಗ್ರಾಮ ಪ್ರದಕ್ಷಿಣಾ ಪ್ರರ್ವಕ ದೇವಾಲಯ, ಯೋಗಶಾಲ ಪ್ರವೇಶ, ಮಹಾಗಣಪತಿ ಪೂಜೆ, ಪುಣ್ಯಾಹ, ಕಲಶ ಸ್ಥಾಪನೆ, ರಕ್ಷಾಸೂತ್ರ ಧಾರಣೆ, ನವಗ್ರಹ ಪೂಜೆ, ವಾಸ್ತುಹೋಮ, ರಾಷೆಘೃಹೋಮ, ಮಹಾಗಣಪತಿ ಹೋಮ, ಪಂಚಾಮೃತ ಅಭಿಷೇಕ, ಶ್ರೀರೇಣುಕಾಯಲ್ಲಮ್ಮ ದೇವಿ ಮೂಲಮಂತ್ರ ಹೋಮ(ಪೂಣರ್ಾಹುತಿ), ಅನ್ನಬಲಿ(ಬಲಿಹರಣ) ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಮತ್ತು ಮಧ್ಯಾಹ್ನ 1 ಗಂಟೆಗೆ ಅನ್ನ ಸಂತರ್ಪಣೆ, ಸಂಜೆ 6 ಗಂಟೆಗೆ ಶೆಟ್ಟಿಹಳ್ಳಿ ರಾಜಬೀದಿಯಲ್ಲಿ ಶಕ್ತಿ ಸ್ವರೂಪಿಣಿಯಾದ ಶ್ರೀ ರೇಣುಕಾಯಲ್ಲಮ್ಮ ನವರ ಮುತ್ತಿನ ಪಲ್ಲಕ್ಕಿ ಉತ್ಸವ, ವೀರಗಾಸೆ, ಮಂಗಳವಾದ್ಯಗಳೊಂದಿಗೆ ಕಾರ್ಯಮಕ್ರಮ ಏರ್ಪಡಿಸಲಾಗಿದೆ, ಭಕ್ತಮಹಾಷಯರು ಸರಿಯಾದ ಸಮಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಥಾಶಕ್ತಿ ತನು, ಮನ,ಧನ ಅರ್ಪಿಸುವುದರೊಂದಿಗೆ, ಶ್ರೀ ಆದಿಶಕ್ತಿ ರೇಣುಕ ಯಲ್ಲಮ್ಮ ದೇವಿಯವರ ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಿ, ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಕೋರುತ್ತೇವೆ,15ನೇ ವರ್ಷದ ಶ್ರೀ ಆದಿಶಕ್ತಿ ರೇಣುಕ ಯಲ್ಲಮ್ಮ ದೇವಿಯ ಅದ್ದೂರಿ ಜಾತ್ರಮಹೋತ್ಸವ ಸಮಾರಂಭ ಕಾರ್ಯಕ್ರಮದಲ್ಲಿ ಶ್ರೀ ದೀಪಿಕಾ, ಮತ್ತು ಅವರ ಬಳಗ, ಶೆಟ್ಟಿಹಳ್ಳಿ ಗ್ರಾಮಸ್ಥರಾದ ಶ್ರೀ ಜಯಕೀರ್ತಿಯವರು ಶ್ರೀದೊಡ್ಡಹನುಮಂತೇಗೌಡರು ಶ್ರೀಆಂಜಿನಪ್ಪನವರು, ಶ್ರೀ,ರಾಜಣ್ಣನವರು, ಶ್ರೀಗೋಪಾಲಣ್ಣ, ಶ್ರೀಹನುಮಂತರಾಯಪ್ಪ, ಶ್ರೀಶಂಕರ್ಗೌಡರು, ಶ್ರೀಮುದ್ದಪ್ಪನವರು, ಶ್ರೀನಟರಾಜಪ್ಪನವರು,ನಾಗಣ್ಣ, ನಾರಾಯಣಪ್ಪನವರು, ಕುಮಾರಣ್ಣ ಹಾಗೂ ಮುಖ್ಯ ಅತಿಥಿಗಳಾಗಿ ಶ್ರೀ ಎ,ನರಸಿಂಹಮೂರ್ತಿ. ಅಧ್ಯಕ್ಷರು ಸ್ಲಂ ಸಮಿತಿ, ಶ್ರೀ ಕಣ್ಣನ್ ಮುಖಂಡರು ಮಾರಿಯಮ್ಮ ನಗರ, ಶಂಕ್ರಪ್ಪ ಮತ್ತು ತಿರುಮಲಯ್ಯ ಸ್ಲಂ ಸಮಿತಿ, ಜಾಬೀರ್ಖಾನ್ ಎಳ್ಳರ ಬಂಡೆ ಶಾಖಾ ಮುಖಂಡರು,ಶ್ರೀ ಅರುಣ್ ಟಿ.ಜಿ ಸ್ಲಂ ಸಮಿತಿ ಪ್ರೋತ್ಸಹಕರು ಶ್ರೀ ಕೃಷ್ಣಮೂರ್ತಿರವರು ರೇಣುಕಾದೇವಿ ಫ್ಲವರ್ ಡೆಕೋರೇಟರ್, ಸಾವಿತ್ರಿ ಬಾಯಿಪುಲೆ ಸಂಘಟನೆಯ ಶ್ರೀ ಅನುಪಮಾ, ಶಾರದಮ್ಮ, ಮಂಗಳಮ್ಮನವರು ಸಾವಿರಾರು ಭಕ್ತಾದಿಗಳು ಪಾಲ್ಗೊಳ್ಳುತ್ತಿದ್ದಾರೆ, ಆತ್ಮೀಯ ಮಾಧ್ಯಮ ಮಿತ್ರರು ಜಾತ್ರಾ ಮಹೋತ್ಸವಕ್ಕೆ ಬಂದು ಪಾಲ್ಗೊಂಡು ವರದಿ ಮಾಡುವ ಮೂಲಕ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಕೋರುತ್ತೇವೆ.